ಕೋವಿಡ್ ವಿರುದ್ಧದ ಹೋರಾಟಕ್ಕೆ ರಜನಿಕಾಂತ್, ವಿಕ್ರಂ ಸಹಾಯಧನ

ಮುಖ್ಯಮಂತ್ರಿ ಪರಿಹಾರ ನಿಧಿಗೆ ಧೇಣಿಗೆ ನೀಡಿದ ತಮಿಳು ನಟರು

 

ಚೆನ್ನೈ: ಕೋವಿಡ್ ವಿರುದ್ಧದ ಹೋರಾಟಕ್ಕೆ ತಮಿಳುನಾಡಿನ ನಟರಾದ ಸುಪರ್ ಸ್ಟಾರ್ ರಜನಿಕಾಂತ್ ಮತ್ತು ಚಿಯನ್ ವಿಕ್ರಂ ಧನಸಹಾಯ ನೀಡಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಿ 50 ಲ್ಷ ರೂಪಾಯಿಗಳನ್ನು ನೀಡಿದ್ದು, ವಿಕ್ರಂ ಅವರು ಆನ್ಲೈನ್ ದೇಣಿಗೆ ಮುಖಾಂತರ 30 ಲಕ್ಷ ರೂಪಾಯಿಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನಿಡಿ ಕೋವಿಡ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.

ಈ ಹಿಂದೆ ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್, ಅಜಿತ್, ಸೂರ್ಯ, ಕಾರ್ತಿ, ಶಿವಕುಮಾರ್, ವಿಟ್ರಿಮಾರನ್, ಮುರುಗದಾಸ್ ಸೇರಿದಂತೆ ಹಲವು ನಟರು ಮುಖ್ಯಮಂತ್ರಿ ಪರಿಹಾರ ನಿಧಿಗೆ ಧನಸಹಾಯ ನಿಡಿದ್ದರು.