ಕೊರೊನಾ ಮಹಾಮಾರಿಗೆ ವಿಜಯಪುರದಲ್ಲಿ ಇನ್ನೊಬ್ಬ ಪರ್ತಕರ್ತ ಬಲಿ

ವಿಜಯಪುರದಲ್ಲಿ ಕೋವಿಡ್​ ನಿಂದ ಮೃತಪಟ್ಟ ಪತ್ರಕರ್ತ

 | 
ಕೊರೊನಾ ಮಹಾಮಾರಿಗೆ ವಿಜಯಪುರದಲ್ಲಿ ಇನ್ನೊಬ್ಬ ಪರ್ತಕರ್ತ ಬಲಿ

ವಿಜಯಪುರ: ಮಹಾಮಾರಿ ಕೊರೊನಾಗೆ ಜಿಲ್ಲೆಯಲ್ಲಿ ಮತ್ತೊಬ್ಬ ಪತ್ರಕರ್ತ ಬಲಿಯಾಗಿದ್ದಾರೆ. ಸ್ಥಳೀಯ ಗುಂಬಜ್ ಎಕ್ಸ್‌ಪ್ರೆಸ್ ದಿನಪತ್ರಿಕೆಯ ಸಹಸಂಪಾದಕ ದತ್ತಾತ್ರೇಯ ಪನಾಳಕರ್(50) ಮೃತಪಟ್ಟಿದ್ದಾರೆ.

ಗ್ಯಾಂಗ್ ಬಾವಡಿ ನಿವಾಸಿಯಾಗಿದ್ದ ಇವರಿಗೆ ಕಳೆದ ಕೆಲವು ದಿನಗಳ ಹಿಂದೆ ಕೋವಿಡ್​ ದೃಢವಾಗಿದ್ದು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗಿನ ಜಾವ ಕೊನೆಯುಸಿರೆಳೆದರು. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.ಈ ಮೂಲಕ ವಿಜಯಪುರ ಜಿಲ್ಲೆಯಲ್ಲಿ ಕೋವಿಡ್​ಗೆ ನಾಲ್ವರು ಪತ್ರಕರ್ತರು ಬಲಿಯಾಗಿದ್ದಾರೆ.